ಯಾವುದೇ ನುಡಿಯಾಗಲಿ ಅದರಲ್ಲಿ ನಾವು ಹಲವು, ಹಲವು ಒರೆಗಳನ್ನು ಬಳಸುತ್ತೇವೆ. ಇದರ ಜೊತೆ ಹಲವು ನುಡಿಗಳಲ್ಲಿ ಹಲವು ಒರೆಗಳು ಹುಟ್ಟುತ್ತವೆ. ಅವುಗಳಲ್ಲಿ ಕೆಲವು ಮಂದಿ ಬಳಸುತ್ತಾರೆ. ಹೊತ್ತು ಕಳೆದ ಹಾಗೆ ಕೆಲವು ಬಳಕೆಯಿಂದ ತಪ್ಪಿಹೋಗುತ್ತವೆ. ಇವುಗಳ ನಡುವೆ ಒಂದಂತು ಮರೆಯಬಾರದು ಒರೆಕಟ್ಟಣೆ ನಿಲ್ಲದ ಕೆಲಸ, ಎಡೆಬಿಡದೆ ನಡೆಯುತ್ತಿರುತ್ತದೆ. ಕನ್ನಡದಲ್ಲು ಹೀಗೆ ನಡೆದುಕೊಂಡು ಬಂದಿದೆ.
ಈ ಹೊತ್ತಿನಲ್ಲಿ ಏರೋಪ್ಲೇನ್ಗೆ ಕನ್ನಡದಲ್ಲಿ ನಡೆದ ಪದಕಟ್ಟಣೆ ಕುರಿತು ಕೆಲವು ಮಾತುಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. ಹಿಂದೆ ಮುದ್ದಣ ಅವರು ಇದಕ್ಕೆ "ಗಾಳಿದೇರ್ (ಗಾಳಿ + ತೇರ್)" ಎಂಬ ಒರೆಯನ್ನು ಕಟ್ಟಿ, ಅದನ್ನು ತಮ್ಮ ಅದ್ಭುತ ರಾಮಾಯಣ ಬರಹದಲ್ಲಿ ಬಳಸಿದ್ದರು.
ಇದು ಇಲ್ಲಿಗೆ ಮುಗಿಲಿಲ್ಲ, ಡಿ.ಎಲ್.ನರಸಿಂಹಾಚಾರ್ ಅವರ "ಪೀಠಿಕೆಗಳು, ಲೇಖನಗಳು" ಹೊತ್ತಗೆಯ "ಕನ್ನಡದಲ್ಲಿ ಶಬ್ದರಚನೆ" (ಹಾಳೆಬದಿ ೮೦೬) ಅಂಕಣ ನೋಡಿದರೆ ಅದರಲ್ಲಿ ಹಿರಿಯರು ಹೇಳುವುದು, ಓರ್ವ ಕನ್ನಡಿಗ (ಹೆಸರು ಗೊತ್ತಿಲ್ಲ) ಇದೇ ಏರೋಪ್ಲೇನ್ಗೆ "ರೆಕ್ಕೆಬಂಡಿ" ಎಂದು ಒರೆ ಕಟ್ಟಿದ್ದರು. ಡಿ.ಎಲ್.ನರಸಿಂಹಾಚಾರ್ ಅವರ ಮಾತುಗಳ ತಿಟ್ಟ ಇಲ್ಲಿದೆ :-
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ