ಬುಧವಾರ, ಮಾರ್ಚ್ 9, 2022

ನಲ್ಬರಹದಲ್ಲಿ ಕನ್ನಡದ್ದೇ ಒರೆಗಳು - ಎರಡು ಎತ್ತುಗೆಗಳು

ಕನ್ನಡ ನಲ್ಬರಹ ಒಂದು ಹೆಗ್ಗಡಲು ಇದ್ದ ಹಾಗೆ, ಹಲವು ಬರಹಗಾರರು ಮತ್ತು ಹಲವು ಬರಹಗಳು, ಅದರಲ್ಲಿ ಕತೆ, ಹೆರ‍್ಕತೆ, ಆಡುಗಬ್ಬ, ಕಟ್ಟೊರೆ ಮುಂತಾದವುಗಳು. ಇವೆಲ್ಲವು ಕನ್ನಡಿಗರನ್ನು ದೊಡ್ಡ ಮಟ್ಟದಲ್ಲಿ ತಲುಪಿದೆ ಹಾಗು ಕನ್ನಡಿಗರಲ್ಲಿ ಒಂದು ದೊಡ್ಡ ಓದುಗರ ಗುಂಪೇ ಇದೆ. ಇದೆಲ್ಲ ತುಂಬಾ ನಲಿವು ತರುವುದರಲ್ಲಿ ಎರಡು ಮಾತಿಲ್ಲ.

ಇದು ಒಂದೆಡೆಯಾದರೆ ಕನ್ನಡ ನಲ್ಬರಹದಲ್ಲಿ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ, ಹಲವು ಬರಹಗಾರರು ಕನ್ನಡದ್ದೇ ಒರೆ ಬಳಸಿದ್ದಾರೆ. ಇಲ್ಲಿ ಎರಡು ಎತ್ತುಗೆಗಳು ನೀಡಲಾಗಿವೆ. 

೧. ಬೆಳುವಲದ ಮಡಿಲಲ್ಲಿ (ಹೆಚ್.ದೇವಿರಪ್ಪ) :- ಹೊತ್ತಗೆ ಹೊದಿಕೆಪುಟ ತಿಟ್ಟ ಇಲ್ಲಿದೆ 


ಈ ಹೊತ್ತಗೆ ಆಯ್ದ ತುಣುಕು ಇಲ್ಲಿ ಸೇರಿಸಲಾಗಿದೆ, ಇದರಲ್ಲೇ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ. ಅವುಗಳಲ್ಲಿ "ಬೆಳುದಿಂಗಳು", "ಕದ್ದಿಂಗಳು", "ಉರುಬು", "ಒಕ್ಕಲಿಗ" ಗಮನಿಸಿ. ಇಂತಹ ಕನ್ನಡದ್ದೇ ಒರೆಗಳನ್ನು ಮತ್ತೆ ಬಳಸೋಣ, ಹಿಂಜರಿಕೆ ಬೇಡವೇ ಬೇಡ.  



೨. ನಿಸರ್ಗ (ಮಿರ್ಜಿ ಅಣ್ಣಾರಾಯ) :- ಹೊತ್ತಗೆ ಹೊದಿಕೆಪುಟ ತಿಟ್ಟ ಇಲ್ಲಿದೆ


ಹೊತ್ತಗೆ ಆಯ್ದ ತುಣುಕು ಇಲ್ಲಿ ಸೇರಿಸಲಾಗಿದೆ, ಇದರಲ್ಲೇ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ. ಅವುಗಳಲ್ಲಿ "ಪಡುವಣ", "ಬಾನಂಚು", "ಇರುಳು", "ಬಯಲು", "ಮರುಕ" ಗಮಿನಿಸಿ. ಬರಿ ನಲ್ಬರಹ ಅಲ್ಲದೇ ಎಲ್ಲ ಬಗೆಯ ಬರಹಗಳಲ್ಲಿ ಇಂತಹ ಒರೆಗಳು ಬಳಕೆಯಾಗಲಿ. ಕನ್ನಡದ್ದೇ ಇರುಳು ಇರುಳಾಗುವುದು ಬೇಡ !!! 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ