ಬುಧವಾರ, ಮಾರ್ಚ್ 16, 2022

ಚಂಪೂ ನುಡಿಗನ್ನಡಿ (ಹಳಗನ್ನಡ ಶಬ್ದಾರ್ಥಸಂಕಲನ - ಪ್ರಯೋಗಗಳೊಂದಿಗೆ)

ಕನ್ನಡ ನುಡಿಗೆ ನಿಡಿದಾದ ಹಿನ್ನಡವಳಿಯಿದೆ, ಇದರಲ್ಲಿ ನಾವು ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಕುರಿತು ಕೇಳಿರುತ್ತೇವೆ. ಆದರೆ ಕನ್ನಡದಲ್ಲಿ ಹಿಂದೆ ಬಳಕೆಯಾದ ಒರೆಗಳ ಕುರಿತು ತಿಳಿದುಕೊಳ್ಳಲು ನೆರವಾಗುವ ಒಂದು ಹೊತ್ತಗೆ "ಚಂಪೂ ನುಡಿಗನ್ನಡಿ". ಇದನ್ನು ಬರೆದವರು ಡಾ || ಪಿ.ವಿ.ನಾರಾಯಣ. ಈ ಹೊತ್ತಗೆಯಲ್ಲಿ ಒರೆಗಳ ಹುರುಳು ಜೊತೆ ಅವುಗಳ ಬಳಕೆ ಕೂಡ ದೊರೆಯುತ್ತದೆ. ಹೊತ್ತಗೆ ಹೊದಿಕೆಪುಟದ ತಿಟ್ಟ ಇಲ್ಲಿದೆ :- 


ಕನ್ನಡದಲ್ಲಿ ಹಿಂದಿನಿಂದಲು ಹಲವು ಬರಹಗಾರರ ಹಲವು ಬರಹಗಳ ಕೊಡುಗೆಯಿದೆ. ಚಂಪೂ ನುಡಿಗನ್ನಡಿ ಹೊತ್ತಗೆಯಲ್ಲಿ ತಿಳಿಸಿರುವ ಒರೆಬಳಕೆ ಯಾವ ಬರಹಗಳಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಯಲು ಆ ಬರಹಗಳ ಪಟ್ಟಿಯ ತಿಟ್ಟ ಇಲ್ಲಿದೆ :- 



ಈ ಹೊತ್ತಗೆಯಲ್ಲಿ ಹಲವು ಹಲವು ಕನ್ನಡ ಒರೆಗಳು ದೊರೆಯುವ ಜೊತೆಗೆ ಕೆಲವು ಒರೆಗಳನ್ನು ನೋಡಿದರೆ ಬೆರಗು ಮೂಡುತ್ತದೆ. ಎಲ್ಲ ಒರೆಗಳಿಗೆ ಹುರುಳು ಜೊತೆ ಹಿಂದೆ ಯಾವ ಬರಹದಲ್ಲಿ ಬಳಕೆಯಾಗಿತ್ತೆಂದು ತಿಳಿಸಲಾಗಿದೆ. ಬೆರಗು ಮೂಡಿಸುವ ಒಂದು ಎತ್ತುಗೆ ಎಂದರೆ ಅದು "ಕಾದಲ್" ಬೇರು ಒರೆಯಿಂದ ದೊರೆತಿರುವ "ಕಾದಲ, ಕಾದಲಳ್, ಕಾದಲಿಸು, ಕಾದಲೆ ಮತ್ತು ಕಾದಲ್ಮೆ" ಒರೆಗಳು. ಈ ಎಲ್ಲ ಒರೆಗಳ ಹುರುಳು, ಬಳಕೆ ಹೊತ್ತಗೆಯಲ್ಲಿದೆ, ಈ ಎಲ್ಲ ಒರೆಗಳು ಕನ್ನಡದ್ದೇ ! ಇದರ ತಿಟ್ಟ ಇಲ್ಲಿದೆ :- 


ಬುಧವಾರ, ಮಾರ್ಚ್ 9, 2022

ನಲ್ಬರಹದಲ್ಲಿ ಕನ್ನಡದ್ದೇ ಒರೆಗಳು - ಎರಡು ಎತ್ತುಗೆಗಳು

ಕನ್ನಡ ನಲ್ಬರಹ ಒಂದು ಹೆಗ್ಗಡಲು ಇದ್ದ ಹಾಗೆ, ಹಲವು ಬರಹಗಾರರು ಮತ್ತು ಹಲವು ಬರಹಗಳು, ಅದರಲ್ಲಿ ಕತೆ, ಹೆರ‍್ಕತೆ, ಆಡುಗಬ್ಬ, ಕಟ್ಟೊರೆ ಮುಂತಾದವುಗಳು. ಇವೆಲ್ಲವು ಕನ್ನಡಿಗರನ್ನು ದೊಡ್ಡ ಮಟ್ಟದಲ್ಲಿ ತಲುಪಿದೆ ಹಾಗು ಕನ್ನಡಿಗರಲ್ಲಿ ಒಂದು ದೊಡ್ಡ ಓದುಗರ ಗುಂಪೇ ಇದೆ. ಇದೆಲ್ಲ ತುಂಬಾ ನಲಿವು ತರುವುದರಲ್ಲಿ ಎರಡು ಮಾತಿಲ್ಲ.

ಇದು ಒಂದೆಡೆಯಾದರೆ ಕನ್ನಡ ನಲ್ಬರಹದಲ್ಲಿ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ, ಹಲವು ಬರಹಗಾರರು ಕನ್ನಡದ್ದೇ ಒರೆ ಬಳಸಿದ್ದಾರೆ. ಇಲ್ಲಿ ಎರಡು ಎತ್ತುಗೆಗಳು ನೀಡಲಾಗಿವೆ. 

೧. ಬೆಳುವಲದ ಮಡಿಲಲ್ಲಿ (ಹೆಚ್.ದೇವಿರಪ್ಪ) :- ಹೊತ್ತಗೆ ಹೊದಿಕೆಪುಟ ತಿಟ್ಟ ಇಲ್ಲಿದೆ 


ಈ ಹೊತ್ತಗೆ ಆಯ್ದ ತುಣುಕು ಇಲ್ಲಿ ಸೇರಿಸಲಾಗಿದೆ, ಇದರಲ್ಲೇ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ. ಅವುಗಳಲ್ಲಿ "ಬೆಳುದಿಂಗಳು", "ಕದ್ದಿಂಗಳು", "ಉರುಬು", "ಒಕ್ಕಲಿಗ" ಗಮನಿಸಿ. ಇಂತಹ ಕನ್ನಡದ್ದೇ ಒರೆಗಳನ್ನು ಮತ್ತೆ ಬಳಸೋಣ, ಹಿಂಜರಿಕೆ ಬೇಡವೇ ಬೇಡ.  



೨. ನಿಸರ್ಗ (ಮಿರ್ಜಿ ಅಣ್ಣಾರಾಯ) :- ಹೊತ್ತಗೆ ಹೊದಿಕೆಪುಟ ತಿಟ್ಟ ಇಲ್ಲಿದೆ


ಹೊತ್ತಗೆ ಆಯ್ದ ತುಣುಕು ಇಲ್ಲಿ ಸೇರಿಸಲಾಗಿದೆ, ಇದರಲ್ಲೇ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ. ಅವುಗಳಲ್ಲಿ "ಪಡುವಣ", "ಬಾನಂಚು", "ಇರುಳು", "ಬಯಲು", "ಮರುಕ" ಗಮಿನಿಸಿ. ಬರಿ ನಲ್ಬರಹ ಅಲ್ಲದೇ ಎಲ್ಲ ಬಗೆಯ ಬರಹಗಳಲ್ಲಿ ಇಂತಹ ಒರೆಗಳು ಬಳಕೆಯಾಗಲಿ. ಕನ್ನಡದ್ದೇ ಇರುಳು ಇರುಳಾಗುವುದು ಬೇಡ !!! 


ಶನಿವಾರ, ಮಾರ್ಚ್ 5, 2022

ಕನ್ನಡದ್ದೇ ಒರೆ ಹೊತ್ತು - ಈ ಹುರುಳಿನಲ್ಲು ಬಳಸೋಣ

ಕನ್ನಡ ನುಡಿಯಲ್ಲಿ ಹಲವು ಕನ್ನಡದ್ದೇ ಒರೆಗಳಿವೆ. ಆ ಹಲವು ಕನ್ನಡದ್ದೇ ಒರೆಗಳಲ್ಲಿ "ಹೊತ್ತು" ಕೂಡ ಒಂದು. ಹಳಗನ್ನಡದಲ್ಲಿ ಇದು "ಪೊೞ್ತು(ಳ್ತು)" ಎಂದು ಬಳಕೆಯಲ್ಲಿತ್ತು ಆದರೆ ಹಳಗನ್ನಡಿಂದ ಹೊಸಗನ್ನಡಕ್ಕೆ ಬಂದರೆ ಈ ಒರೆ ಮಾರ‍್ಪಾಟಿಗೆ ಒಳಗೊಂಡು ಈಗ "ಹೊತ್ತು" ಎಂದು ಬಳಕೆಯಲ್ಲಿದೆ. ಇದು ಒಂದೆಡೆಯಾದರೆ, ಯಾವುದೇ ನುಡಿ ನೋಡಿದರು ಒಂದು ಒರೆಗೆ ಹಲವು ಹುರುಳಿರುತ್ತವೆ, ಅದು ಹೊತ್ತು ಒರೆಗೆ ಒಪ್ಪುವ ಮಾತು ಕೂಡ ಹೌದು. ಹೊತ್ತು ಒರೆಯ ಹಲವು ಹುರುಳುಗಳಲ್ಲಿ ಒಂದು ನೇಸರು ಇಲ್ಲ ಸೂರ‍್ಯ. 

ಕನ್ನಡಿಗರ ಮಾತಿನಲ್ಲು ಈಗಲೂ ನೇಸರ ಹುರುಳಿನಲ್ಲಿ ಹೊತ್ತು ಒರೆ ಬಳಕೆಯಲ್ಲಿದೆ. ಹೊತ್ತು ಮುಳುಗುವುದು ಸಲುವಾಗಿ ಕನ್ನಡಿಗರ ಮಾತಿನಲ್ಲಿ ನೇಸರು ಹುರುಳಿನಲ್ಲಿ "ಹೊತ್ತು" ಒರೆ ಬಳಕೆಯಲ್ಲಿದೆ. ಕನ್ನಡಿಗರ ಮಾತನ್ನು ಹೊರತುಪಡಿಸು ನೋಡಿದರೆ ನಲ್ಬರಹದಲ್ಲಿ "ಹೊತ್ತು" ನೇಸರು ಹುರುಳಿನಲ್ಲಿ ಬಳಕೆಯಾಗಿದೆ, ಕೆಲವು ಎತ್ತುಗೆ ಆಮೇಲೆ ನೀಡುವೆ ಆದರೆ ಎಲ್ಲ ಬಗೆಯ ಕನ್ನಡ ಬರಹಗಳಲ್ಲಿ ಹೊತ್ತು ನೇಸರು ಹುರುಳಿನಲ್ಲಿ ಬಳಕೆಯಲ್ಲಿಲ್ಲ. 

ಕನ್ನಡ ಬರಹವೆಂದರೆ ಅದರಲ್ಲಿ ಸುದ್ದಿಹಾಳೆ, ಆಡಳಿತ ಕಡತ, ಅರಿಮೆ ಬರಹ ಇಲ್ಲ ಮಕ್ಕಳ ಕಲಿಕೆ ನೋಡಿದರೆ ನೇಸರು ಹುರುಳಿನಲ್ಲಿ "ಹೊತ್ತು" ಹೆಚ್ಚು ಕಡಿಮೆ ಬಳಸುವುದೇ ಇಲ್ಲ. ಕನ್ನಡ ಬರಹಗಳಲ್ಲಿ ಕನ್ನಡದ್ದೇ ಒರೆ ಬಳಸುವ ಹಿಂಜರಿಕೆ ಹಿಂದಿನಿಂದಲು ಬೆಳೆದು ಬಂದಿದೆ, ಕನ್ನಡದ್ದೇ ಒರೆಗಳ ಬಳಕೆನೆಲೆ ಕುಗ್ಗಿಸುವ ಕೆಲಸವೆಂದು ಹೇಳಬಹುದು. ತೊಡಕು ಗುರುತಿಸಿದ ಮೇಲೆ ಕನ್ನಡದ್ದೇ ಒರೆ ಸುತ್ತಲೂ ಬೆಳೆದಿರುವ ಈ ಕೀಳರಿಮೆಗೆ ಒಂದು ಕೊನೆ ಬೀಳಲಿ, ಎಲ್ಲ ಬಗೆಯ ಬರಹಗಳಲ್ಲಿ "ಹೊತ್ತು" ಒರೆ ನೇಸರು ಹುರುಳಿನಲ್ಲಿ ಬಳಕೆಯಾಗಲಿ. 

ಕನ್ನಡ ನಲ್ಬರಹದಲ್ಲಿ "ಹೊತ್ತು" ನೇಸರು ಹುರುಳಿನಲ್ಲಿ ಬಳಕೆಯಾಗಿದೆ ಎಂದು ಹಿಂದೆ ಹೇಳಿದ ಹಾಗೆ ಬಳಕೆಯಾಗಿರುವ ಒಂದೆರಡು ಎತ್ತುಗೆ ನೀಡುವೆ. ಡಾ || ಗೀತಾ ನಾಗಭೂಷಣ ಅವರು ತಮ್ಮ "ಸವಾಲು" ಹೆರ‍್ಕತೆಯಲ್ಲಿ ಬಳಸಿದ್ದಾರೆ. ಹೊತ್ತಗೆ ಹೊದಿಕೆಪುಟ ಜೊತೆ "ಹೊತ್ತು" ಒರೆ ಬಳಕೆಯಾಗಿರುವ ಹಾಳೆಬದಿಯ ತಿಟ್ಟ ಇಲ್ಲಿದೆ :- 




ಡಾ || ಕೆ.ಶಿವರಾಮ ಕಾರಂತರು ಕೂಡ ತಮ್ಮ "ಮರಳಿ ಮಣ್ಣಿಗೆ" ಹೆರ‍್ಕತೆಯಲ್ಲಿ "ಹೊತ್ತು" ಒರೆಯನ್ನು ನೇಸರು ಹುರುಳಿನಲ್ಲಿ ಬಳಸಿದ್ದಾರೆ. ಹೊತ್ತಗೆ ಹೊದಿಕೆಪುಟ ಹಾಗು "ಹೊತ್ತು" ಬಳಕೆಯಾದ ಹಾಳೆಬದಿ ತಿಟ್ಟ ಇಲ್ಲಿದೆ :-